Monday, November 30, 2009

ಉದ್ಯಾನ ನಗರದಲ್ಲೊಂದು , ಧನ್ವಂತರಿ ವನ,


ನಗರದ ಜ್ಙಾನ ಭಾರತಿ ಆವರಣದಲ್ಲಿ ದನ್ವಂತರಿ ವನ ಒಂದು ಸದ್ದಿಲ್ಲದೆ ತಲೆ ಎತ್ತುತ್ತಿದೆ, ಗಿಡ ಮೂಲಿಕೆ ಔಷಧಗಳ ಮೂಲಕ ನಾನಾ ರೋಗ ನಿವಾರಣೆ ಸಾದ್ಯ ಎಂಬ ಅಂಶವನ್ನು ಮುಖ್ಯವಾಗಿಟ್ಟು ಕೋಂಡು ಈ ವನದಲ್ಲಿ ಹಲವು ವಿಧದ ಔಷದಗಳ್ಳನ್ನು ಬೆಳೆಯಲಾಗುತ್ತಿದೆ.
ಬೆಂಗಳೂರಿನಲ್ಲಿ ಅಭಿವೃದ್ದಿಯ ಹೆಸರಿನಲ್ಲಿ ಸಸ್ಯ ಕಾಶಿಯೇ ನಾಶವಾಗುತ್ತಿರುವ ಸಂದರ್ಬದಲ್ಲಿ ಸಂಸ್ಥೆಯೊಂದು ಸಕಲ ರೋಗಗಳಿಗೂ ಉಪಯುಕ್ತವಾಗುವ ಔಷದ ಗುಣವುಳ್ಳ ಸಸ್ಯಗಳನ್ನು ಸದ್ದಿಲ್ಲದೆ ಬೆಳೆಸುತ್ತಿದೆ !
ಆ ಜಾಗದ ಹೆಸರು ಧನ್ವಂತರಿ ವನ ಬೆಂಗಳೂರು ವಿಶ್ವ ವಿದ್ಯಾಲಯದ ಜ್ಞಾನ ಭಾರತಿಯ ಆವರಣದಲ್ಲಿ ಈ ವನ ತಲೆ ಎತ್ತಿದೆ . ಭಾರತೀಯ ವೈದ್ಯ ಪದ್ದತಿ ಮತ್ತು ಹೋಮೀಯೋಪತಿ ಇಲಾಖೆ , ಕರ್ನಾಟಕ ಅರಣ್ಯ ಇಲಾಖೆ ಹಾಗು ಬೆಂಗಳೂರು ವಿ.ವಿ.ಸಹದ್ಯೋಗದೊಂದಿಗೆ, ಐ.ಎಸ್.ಎಂ ಎಂಬ ಖಾಸಗಿ ಸಂಸ್ಥೆಯು , ಜ್ಙಾನ ಬಾರತಿಯ ೪೨.೩೭ ಎಕರೆ ಜಾಗದಲ್ಲಿ, ಔಷದ ಸಸ್ಯಗಳನ್ನು ಬೆಳೆಸುತ್ತಿದೆ. ಇಲ್ಲಿ ಮುಖ್ಯವಾಗಿ ಮದುಮೇಹ, ಸೌಂದರ್ಯವರ್ದಕ, ಗರ್ಬಕೋಶದ ಕಾಯಿಲೆ , ಕೆಮ್ಮು ದಮ್ಮು, ಕುಷ್ಠ ರೋಗ, ಮೂಳೆ ಮುರಿತ , ಕೀಲು ನೋವು, ಚರ್ಮವ್ಯಾದಿ, ಮೊಡವೆ , ಬಾವು, ರಕ್ತಸ್ತರಾವ, ನೇತ್ರ ರೋಗ, ಪಾಶ್ಚಯ ವಾಯು, ಜ್ಞಾಪಕ ಶಕ್ತಿ ಕೊರತೆ ,ಉರಿಮೂತ್ರ, ಅಸ್ತಮ , ದಂತ ರೋಗ , ಹಾಗು ಸ್ತ್ರೀ ಸಂಬಂದ ರೋಗಗಳಿಗೆ ಪರಿಹಾರ ನೀಡುವ ಗಿಡ ಮೂಲಿಕೆ ಸಸ್ಯಗಳಿವೆ , ಇನ್ನೂರಕ್ಕೂ ಹೆಚ್ಚಿನ ಔಷಧ ಸಸ್ಯಗಳು ಇಲ್ಲಿವೆ , ಕೆಲವು ಗಿಡಗಳು ಉಪಯೋಗಕ್ಕೆ ಬಂದರೆ ಮತ್ತೆ ಕೆಲವು ಸಸ್ಯಗಳ, ಬೇರು ಉಪಯುಕ್ಕ್ಕೆ , ಇನ್ನು ಕೆಲವು ಗಿಡಗಳ ಕಾಂಡ ಪ್ರಯೋಜನ ಕಾರಿ ,
ಧನ್ವಂತರಿಯ ಇತಿಹಾಸ :
ಆರೋಗ್ಯವನ್ನು ಕಾಪಾಡುವುದು ಆರ್ಯುವೇದ ಎಂಬ ಮಾತಿದೆ . ವಿಷ್ಣುವಿನ ಮೂಲ ಅವತಾರವಾದ ದನ್ವಂತರಿ, ಅಶ್ವಿನಿ ಕುಮಾರರ, ಆರ್ಯುವೇದದ ಪಿತಾಮಹ ಎಂಬ ಪ್ರತೀತಿ ಇದೆ, ದನ್ವಂತರಿ ಎಂದರೆ, ಆದಿ ದೈವ ಔಷದ , ಆಯುರ್ವೇದದ ಮೂಲ ಕೂಡ ದನ್ವಂತರಿ ಎಂಬ ಮಾತಿದೆ , ಶತಮಾನಗಳ ಇತಿಹಾಸ ಹೊಂದಿರುವ ದನ್ವಂತರಿ ಎಂಬ ಆರ್ಯುವೇದದ ಬಗ್ಗೆ ಮೊದಲು ಬಾಯಿಂದ ಬಾಯಿಗೆ ಅದರ ಜ್ಞಾನ ಪ್ರಸಾರವಾಗುತ್ತಿದೆ. ಆದರೆ ಮೂರು ಸಾವಿರ ವರ್ಷಗಳ ಈಚೆಗೆ ಪುಸ್ತಕ ರೂಪದಲ್ಲಿ ಜನರ ನಂಬಿಕೆಗೆ ಪಾತ್ರವಾಗಿ ಪ್ರಾಮುಖ್ಯ ಪಡೆದಿದೆ , ಈ ಆರ್ಯುವೇದ ಪದ್ದತಿ , ಪಂಚಭೂತಗಳಾದ ವಾಯು, ಭೂಮಿ, ಜಲ, ಅಗ್ನಿ, ಆಕಾಶ ಇವುಗಳ ಮೂಲ ರೂಪ ಆಯುರ್ವೇದ ಮೂಲತಃ ದೇಶೀಯ ಪದ ಇದು ಇತ್ತೀಚೆಗೆ ವಿದೇಶಗಳಲ್ಲಿ ಅತಿ ಹೆಚ್ಚು ಬೇಡಿಕೆ ಗಳಿಸಿಕೊಂಡಿದೆ ಆದರೆ ಇಲ್ಲಿ ,
ದನ್ವಂತರಿ ವನ ಪ್ರಾರಂಬವಾಗಿದ್ದು ೧೯೮೭ರಲ್ಲಿ ಆದರೆ ಇದುವರೆಗು ಬೆಂಗಳೂರಿನ ಹೆಚ್ಚಿನ ಜನರಿಗೆ ಇದರಬಗ್ಗೆ ತಿಳಿದಿಲ್ಲ , ಗೊತ್ತಿರುವವರು ಮಾತ್ರ ಇಲ್ಲಿಗೆ ಬಂದು ತಮಗೆ ಬೇಕಾದ ಗಿಡಗಳನ್ನು ಖರೀದಿಸುತ್ತಾರೆ, ಇಲ್ಲಿ ಎಲ್ಲ ಸಸ್ಯಗಳಿಗು ಮನುಷ್ಯನ ಒಂದಿಲ್ಲೊಂದು ರೋಗವನ್ನು , ನಿವಾರಣೆ ಮಾಡುವ ಶಕ್ತಿ ಇದೆ, ಇಲ್ಲಿ ಬೆಳೆಯುವ ಪ್ರತಿಯೊಂದು ಔಷದ ಸಸ್ಯದ ಬೆಲೆ ೧.೫೦ ರೂ, ಗಳಿಂದ ೩ರೂ ಮಾತ್ರ .
ಸಸ್ಯದ ಉಪಯೋಗ :
ಗುಲಗಂಜಿ ಬಳ್ಳಿ, (ಉಪಯಕ್ತ ಬಾಗ ಎಲೆ., ನಿವಾರಕ ರೋಗ ಗಂಟಲು ನೋವು) ,ಮದುನಾಶಿನಿ (ಮದುಮೇಹ ),ಉಂಚಿಕ (ಚರ್ಮಕ್ಕೆ ಸಂಬಂದಿಸಿದಂತೆ )ಸೀತೆ ಅಶೋಕ ಗರ್ಬಕೋಶ, ಅಮೃತ ಬಳ್ಳಿ- ಕಾಮಲೆ , ಇದರ ಬಗ್ಗೆ ಸಂಸ್ಥೆ ಸಿಬ್ಬಂದಿ ಜಾಗೃತ ವಹಿಸಬೇಕಾಗಿದೆ, ಇಲ್ಲಿ ಸಿಗುವ ಸಸ್ಯಗಳು ಹಾಗು ಅವುಗಳಿಂದಾಗುವ ಪ್ರಯೋಜನಗಳ ಬಗ್ಗೆಯು , ಜನ ಸಾಮಾನ್ಯರಿಗೆ ಅರಿವು ಮೂಡಿಸಬೇಕಾಗಿದೆ .ಆಯುರ್ವೇದದ ವೈದ್ಯರಾದ ಕೆ.ಸಿ.ಬಳ್ಳಾಳ್ ಪ್ರಕಾರ ಗಿಡ ಮೂಲಿಕೆಗಳು ಇಂಗ್ಲೀಷ್ ಔಷದಕ್ಕಿಂತ ಹೆಚ್ಚು ಪರಿಣಾಮಕಾರಿ, ಆಹಾರ ರೂಪದಲ್ಲಿ ದೇಹವನ್ನು ಸ್ವಾಭಾವಿಕವಾಗಿ ಸದೃಡಗೊಳಿಸುತ್ತಾ ಆರೋಗ್ಯವನ್ನು ಕಾಪಾಡುವುದೇ ಈ ಆಯುರ್ವೇದದ ಮಹತ್ವ.
ರೂಪ.ಎಸ್,

1 comment:

  1. hey nice one... but am not much interested in ayurveda sorry!!!!

    ReplyDelete